‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸುಸಮಯದಲ್ಲಿ ಸಿದ್ದರಾಮಯ್ಯ ಎಂದಿನಂತೆ ಹುಳುಕುಬುದ್ಧಿ ಮತ್ತು ವಿಭಜಕ ಮನಸ್ಥಿತಿಯಿಂದ ಬೆತ್ತಲಾಗಿದ್ದಾರೆ. ತ್ರಿವರ್ಣದಲ್ಲಿರುವ ಪವಿತ್ರ ಕೇಸರಿಯನ್ನು ತಮ್ಮ ಬಂಟರ ಸಲುವಾಗಿ ಕೆಂಪು ಮಾಡಿ ಅವಿವೇಕ, ಅಪ್ರಬುದ್ಧತೆ ತೋರಿಸಿ ಗಾಂಪರೊಡೆಯ ಎನಿಸಿಕೊಂಡಿದ್ದಾರೆ. ಹುಂಬ ಚರ್ಚಾಪಟುವಿನ ಪಾಠ ಬಿಜೆಪಿಗೆ ಬೇಕಾಗಿಲ್ಲ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.