ಜಗತ್ತಿನಲ್ಲಿರುವ ಕೋಟ್ಯಂತರ ಮಂದಿಯ ಮೇಲೆ ‘ಆದರ್ಶ ಪುರುಷ’ರ ನಂಬಿಕೆಯನ್ನು ಹೇರುವುದಕ್ಕೆ ಇವರು ಎಲ್ಲರಿಗಿಂತ ಮಿಗಿಲಾದವರೆ? ಆದರ್ಶದ ಬಗ್ಗೆ ಬೋಧಿಸುವವರು ತಮ್ಮ ಕಾರ್ಯವೈಖರಿ, ದೇಣಿಗೆ ಸಂಗ್ರಹ ಮತ್ತು ಅದರ ಬಳಕೆಯನ್ನು ಏಕೆ ಪಾರದರ್ಶಕವಾಗಿ ಇರಿಸಿಲ್ಲ? ಈ ‘ಆದರ್ಶ ಪುರುಷರು’ ದೇಶದ ಬಹುಸಂಖ್ಯಾತ ಕೆಳವರ್ಗದವರಿಗೆ ನೀಡುತ್ತಿರುವ ಕಿರುಕುಳದ ಕುರಿತು ಏಕೆ ಚಕಾರ ಎತ್ತುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.