ಅಗ್ನಿಶಾಮಕದಳ, ಮುಳುಗು ತಜ್ಞರು ಹಾಗೂ ಸವಣೂರಿನ ನಾಲ್ವರು ಮುಳುಗುತಜ್ಞರನ್ನು ಹಾಗೂ ಗುತ್ತಿಗಾರಿನ ವಿಪತ್ತು ನಿರ್ವಹಣಾ ಘಟಕದವರನ್ನು ಕರೆಸಿಕೊಂಡು ಸ್ಥಳೀಯರ ಸಹಕಾರದೊಂದಿಗೆ ಯುವಕರಿಬ್ಬರಿಗಾಗಿ ಶೋಧಕಾರ್ಯ ಆರಂಭಿಸಲಾತ್ತು. ಭಾನುವಾರ ಮಧ್ಯಾಹ್ನ ವೇಳೆಗೆ ಕಾರನ್ನು ಪತ್ತೆ ಮಾಡಿ ಮೇಲಕ್ಕೆತ್ತಲಾಗಿದ್ದರೂ ಕಣ್ಮರೆಯಾದ ಅವರಿಬ್ಬರ ಸುಳಿವು ಲಭಿಸಿರಲಿಲ್ಲ.