ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video| ಸರಳಿಗೆ ಸಿಕ್ಕಿ ನರಳುತ್ತಿದ್ದ ಪಕ್ಷಿಯ ರಕ್ಷಿಸಿದ ಪೊಲೀಸ್: ಪ್ರಶಂಸೆ

Last Updated 1 ಜನವರಿ 2023, 4:52 IST
ಅಕ್ಷರ ಗಾತ್ರ

ಬೆಂಗಳೂರು: ಜಾಹೀರಾತು ಸ್ಥಾವರವೊಂದರ ಕಬ್ಬಿಣದ ಸರಳುಗಳಿಗೆ ಸಿಲುಕಿ ಒದ್ದಾಡುತ್ತಿದ್ದ ಪಕ್ಷಿಯೊಂದನ್ನು ರಾಜಾಜಿನಗರದ ಟ್ರಾಫಿಕ್‌ ಪೊಲೀಸ್‌ ಸುರೇಶ್‌ ಎಂಬುವವರು ರಕ್ಷಿಸಿದ್ದಾರೆ.

ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸ್‌ ಉಪ ಆಯುಕ್ತ ಕುಲದೀಪ್‌ ಕುಮಾರ್‌ ಜೈನ್‌ ಅವರು ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನಾಗರಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

‘ಪೊಲೀಸರ ಸುಪ್ತ ಮತ್ತು ಬಹಿರಂಗವಾಗದ ಕೆಲಸಗಳಿವು. ರಾಜಾಜಿನಗರದ ಟ್ರಾಫಿಕ್‌ ಪೊಲೀಸ್‌ ಸುರೇಶ ಅವರ ಉತ್ತಮ ಕೆಲಸ‘ ಎಂದು ಕುಲದೀಪ್‌ ಜೈನ್‌ ತಮ್ಮ ವಿಡಿಯೊದೊಂದಿಗೆ ಬರೆದುಕೊಂಡಿದ್ದಾರೆ.

ವಿಡಿಯೊ ಯಾವಾಗಿನದ್ದು, ಎಲ್ಲಿಯದ್ದು ಎಂಬುದರ ಮಾಹಿತಿಯನ್ನು ಪೊಲೀಸ್‌ ಅಧಿಕಾರಿ ಒದಗಿಸಿಲ್ಲ. ಆದರೆ, ವಿಡಿಯೊ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT