‘ಬಾಂಗ್ಲಾದೇಶ ಢಾಕಾದ ಖಸೂಲ್ ಬಿಕ್ರಮಪುರ್ದ ನಿವಾಸಿ ಅಪುರ್ಬ್ ರಾಯ್, 2005ರಲ್ಲಿ ಪರಿಚಯಸ್ಥರ ಜೊತೆ ಗಡಿ ಮೂಲಕ ದೇಶದೊಳಗೆ ಅಕ್ರಮವಾಗಿ ನುಸುಳಿದ್ದ. ಪಶ್ಚಿಮ ಬಂಗಾಳ, ಕರ್ನಾಟಕ ಹಾಗೂ ಇತರೆ ರಾಜ್ಯಗಳಲ್ಲಿ ವ್ಯಾಪಾರ ಮಾಡಿಕೊಂಡಿದ್ದ. ಇತ್ತೀಚೆಗೆ ಜುಲೈ 28ರಂದು ಅಬುದಾಬಿಗೆ ಹೋಗಲೆಂದು ವಿಮಾನ ನಿಲ್ದಾಣಕ್ಕೆ ಬಂದಿದ್ದಾಗ, ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.