ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಬಸವ ಕಲ್ಯಾಣ ಕ್ಷೇತ್ರವನ್ನು ಬಿಜೆಪಿ ವಶಕ್ಕೆ ಪಡೆಯಬೇಕಾದರೆ ಈ ಆಯ್ಕೆ ಸೂಕ್ತ ಎಂದು ಕೆಲವು ಸದಸ್ಯರು ಸಲಹೆ ನೀಡಿದರು. ಮರಾಠಾ ನಿಗಮ ರಚನೆಯಿಂದ ಮರಾಠಾ ಸಮುದಾಯ ಮತ ಸೆಳೆಯಲು ಸಾಧ್ಯ. ಹಾಗೆಯೇ, ನಿರ್ಣಾಯಕವಾಗಿರುವ ಲಿಂಗಾಯತ ಮತ ಅನಾಯಾಸವಾಗಿ ದಕ್ಕುವುದರಿಂದ ವಿಜಯೇಂದ್ರ ಸ್ಪರ್ಧಿಸಿದರೆ ಒಳಿತು ಎಂಬ ಅಭಿಪ್ರಾಯ ಮೂಡಿತು. ಅಂತಿಮ ತೀರ್ಮಾನವನ್ನು ವರಿಷ್ಠರಿಗೆ ಬಿಡಲು ನಿರ್ಧರಿಲಾಯಿತು ಎಂದು ಮೂಲಗಳು ತಿಳಿಸಿವೆ.