‘ಶಿಕ್ಷಣ ಸಚಿವರ ಮೈಯಲ್ಲಿ ಹೆಡಗೇವಾರ್ ದೆವ್ವ ಹೊಕ್ಕಿದೆ’
ತಿಪಟೂರು (ತುಮಕೂರು): ‘ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮೈಯಲ್ಲಿ ಹೆಡಗೇವಾರ್ ದೆವ್ವ ಹೊಕ್ಕಿದೆ. ಹಾಗಾಗಿಯೇ, ಶಾಲಾ ಪಠ್ಯದಲ್ಲಿ ಪುರೋಹಿತಶಾಹಿ ವಿಚಾರಗಳನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದು, ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡಲಾಗುತ್ತಿದೆ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಟೀಕಿಸಿದರು.