ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಸ್ಮಾರ್ಟ್ ಸಿಟಿ ಸಲಹಾ ಸಮಿತಿಯಲ್ಲಿ ಸಂಸದರು, ಶಾಸಕರು ಇರುತ್ತಾರೆ. ಈಗ ಬೆಂಗಳೂರು ಕೇಂದ್ರವನ್ನಷ್ಟೇ ಯೋಜನೆಯಡಿ ತೆಗೆದುಕೊಳ್ಳಲಾಗಿದೆ. ಸಂಸದ ಪಿ.ಸಿ. ಮೋಹನ್ ಅಧ್ಯಕ್ಷರಾಗಿದ್ದರೆ, ಶಿವಾಜಿನಗರ, ಶಾಂತಿನಗರ, ಚಾಮರಾಜಪೇಟೆ, ಗಾಂಧಿನಗರ ಶಾಸಕರು ಸದಸ್ಯರಾಗಿದ್ದಾರೆ. ಅವರ ಸಲಹೆ ಆಧರಿಸಿ ಯೋಜನೆ ರೂಪಿಸಲಾಗಿದ್ದು, ಕೇಂದ್ರ ಸರ್ಕಾರದ ಅನುಮೋದನೆಯನ್ನೂ ಪಡೆಯಲಾಗಿದೆ. ವೈಟ್ ಟಾಪಿಂಗ್ಗೆ ಅನುದಾನ ಬಳಸಲಾಗಿದೆ. ಶಿವಾಜಿನಗರದಲ್ಲಿ ಪಾರಂಪರಿಕ ಕಟ್ಟಡ ಇದ್ದು, ಅಲ್ಲಿ ಆಗಿರುವ ಅಭಿವೃದ್ಧಿಯನ್ನೊಮ್ಮೆ ನೋಡಿ. ನಿಮ್ಮ ಪಕ್ಷದ ಶಾಸಕರೂ ಇದ್ದಾರೆ’ ಎಂದರು.