ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾಣೇಶ್, ‘ಈ ಹಿಂದೆ ಇದೇ ಪ್ರಶ್ನೆ ಕೇಳಿದಾಗ ಭಗವದ್ಗೀತೆ ಬೋಧನೆಗೆ ಕ್ರಮ ತೆಗೆದುಕೊಳ್ಳಲಾಗುವುದು. ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ತಜ್ಞರ ಸಮಿತಿ ರಚಿಸುತ್ತೇವೆ. ಪಠ್ಯ ರೂಪಿಸಲು ಸಮಿತಿ ರಚಿಸುತ್ತೇವೆ ಎಂದಿದ್ದೀರಿ. ಆದರೆ, ಈಗ ಲಿಖಿತ ಉತ್ತರದಲ್ಲಿ ಆ ಪ್ರಸ್ತಾವ ಇಲ್ಲ ಎಂದು ಹೇಳಿದ್ದೀರಿ. ಭಗವದ್ಗೀತೆ ಬೋಧನೆಗೆ ಯಾರ ವಿರೋಧ ಇಲ್ಲ. ಆದರೂ, ಏಕೆ ಈ ರೀತಿಯ ಉತ್ತರ? ಭಗವದ್ಗೀತೆ ಅಳವಡಿಸಲು ಸರ್ಕಾರಕ್ಕೆ ಮುಜುಗರ ಇದೆಯೇ’ ಎಂದು ಪ್ರಶ್ನಿಸಿದರು.