ಪಂಚಾಯಿತಿ ವ್ಯಾಪ್ತಿಯಲ್ಲಿ ಸೊಳ್ಳೆ ಕಾಟ ವಿಪರೀತವಾಗಿತ್ತು. ಇದರಿಂದಾಗಿ, 680 ಮನೆಗಳಿರುವ ಈ ಗ್ರಾಮದಲ್ಲಿ ಮಲೇರಿಯಾ ಹಾಗೂ ಡೆಂಗಿ ರೋಗದಿಂದ ಜನರು ಬಳಲುತ್ತಿದ್ದರು. ಇದರ ನಿಯಂತ್ರಣಕ್ಕೆ ಜಿಲ್ಲಾಡಳಿತ ಬೂದು ನೀರು ನಿಯಂತ್ರಣ ಉಪಕ್ರಮಗಳನ್ನು ಆರಂಭಿಸಿತು. ಈ ವೇಳೆ, ಗೀತಾ ಅವರು ವೈಯಕ್ತಿಕ ಶೌಚಾಲಯದ ಹಾಗೂ ಕೊಳಚೆ ಗುಂಡಿ ಕುರಿತು ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು.