ಬೆಂಗಳೂರು:‘ನಮಗೆ ಬಿಜೆಪಿ ಮತ್ತು ಆರ್ಎಸ್ಎಸ್ ತಂದೆ–ತಾಯಿ ಇದ್ದ ಹಾಗೆ. ಜನಪರ ಚಿಂತನೆ, ಆಡಳಿತದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಬಿಜೆಪಿ ಹೇಳಿಕೊಟ್ಟಿದ್ದರೆ, ಆರ್ಎಸ್ಎಸ್ ನಮಗೆ ದೇಶಭಕ್ತಿ, ಸಾಮಾಜಿಕ ಸೇವೆಯಂತಹ ಉದಾತ್ತ ಗುಣಗಳನ್ನು ಹೇಳಿ ಕೊಟ್ಟಿದೆ’ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದ್ದಾರೆ.