ಮಕ್ಕಳ ಹಕ್ಕುಗಳು, ರಕ್ಷಣೆ ಮತ್ತು ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸುವ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಸಿದವರ ಪೈಕಿ, ರಾಯಚೂರಿ ನವರಾದ ವೀಣಾ ಪಲ್ಲಕ್ಕಿ, ಜಯಶ್ರೀ, ಶಿವಮೊಗ್ಗದ ಡಿ. ಶಂಕರಪ್ಪ, ಬೆಂಗಳೂರಿನವರಾದ ಮರಿಸ್ವಾಮಿ, ಬಿಜು ಪಿ. ಥಾಮಸ್, ಮಧು, ವಾಸುದೇವ ಶರ್ಮಾ, ವಿ.ಪಿ. ನಿರಂಜನಾರಾಧ್ಯ, ಧಾರವಾಡದ ಅಶೋಕ ಜಿ. ಯರಗಟ್ಟಿ, ಬೆಳಗಾವಿಯ ಭಾರತಿ ಎಂಬ 10 ಜನರ ಹೆಸರನ್ನು ಇಲಾಖೆ ಶಿಫಾರಸು ಮಾಡಿತ್ತು. ಆದರೆ, ಈ ಪಟ್ಟಿಯಲ್ಲಿ ನಾಗಣ್ಣಗೌಡ ಅವರ ಹೆಸರು ಇಲ್ಲ.