‘ಶೇಷಗಿರಿರಾವ್ ಆಶಯದಂತೆ ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ, ಜ್ಞಾನಪೀಠ, ಸರಸ್ವತಿ ಸಮ್ಮಾನ್, ನೃಪತುಂಗ, ಪಂಪ, ಕುವೆಂಪು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೆ ಆಯ್ಕೆಯಾಗದವರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಡಾ.ಟಿ.ವೆಂಕಟೇಶಮೂರ್ತಿ ಮತ್ತು ಬೆಳಕೆರೆ ಲಿಂಗರಾಜಯ್ಯ ಅವರಿದ್ದ ಸಮಿತಿಯು ಸುಮಿತ್ರಾಬಾಯಿ ಅವರನ್ನುಸರ್ವಾನುಮತದಿಂದ ಪ್ರಶಸ್ತಿಗೆ ಆಯ್ಕೆಮಾಡಿದೆ’ ಎಂದು ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ತಿಳಿಸಿದ್ದಾರೆ.