ಸಾಮಾಜಿಕ, ರಾಜಕೀಯ, ಚಿತ್ರರಂಗದ ಕುರಿತು ನಿರಂತರವಾಗಿ, ನಿಷ್ಠುರ ಅಭಿಪ್ರಾಯಗಳನ್ನು ನಟ ಚೇತನ್ ಅವರು ಹಂಚಿಕೊಳ್ಳುತ್ತಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರ ಕುರಿತು ಚೇತನ್ ಮಾಡಿದ್ದ ಪೋಸ್ಟ್ಗಳು ವಿವಾದಕ್ಕೆ ಗುರಿಯಾಗಿದ್ದವು. ಸಿದ್ದರಾಮಯ್ಯ ಅವರನ್ನು ಬ್ರಾಹ್ಮಣ್ಯ ಬಿತ್ತುವ ನಾಯಕ ಎಂದಿದ್ದ ಚೇತನ್, ಕುಮಾರಸ್ವಾಮಿ ಅವರ ಕ್ರಾಂತಿಕಾರಿ ಮಾತುಗಳೆಲ್ಲವೂ ಅಸಂಬದ್ಧ ಎಂದಿದ್ದರು. ಜೆಡಿಎಸ್ ಒಂದು ಬ್ರಾಹ್ಮಣ್ಯದ ಪಕ್ಷ ಎಂದೂ ಕರೆದಿದ್ದರು. ಬ್ರಾಹ್ಮಣ್ಯದ ವಿರುದ್ಧದ ಅವರ ಹೇಳಿಕೆ, ‘ಕಾಂತಾರ’ ಸಿನಿಮಾದ ಕುರಿತ ಅವರ ಅಭಿಪ್ರಾಯಗಳು ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದವು.