ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್,‘ನಾವು ಪ್ರಕಟಿಸಿದ ‘ಮಹಿಳಾ ಸಾಹಿತ್ಯ ಸಂಪುಟ’ದ ಜವಾಬ್ದಾರಿಯನ್ನು ಮಹಿಳೆಯರು ಹೊತ್ತಿದ್ದರು. ಕೆಲವರು ಗಡುವಿಗೂ ಮುನ್ನ ಲೇಖನಗಳನ್ನು ಕಳುಹಿಸಿ,ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದರು.ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ಕೊಟ್ಟರೆ, ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸುತ್ತಾರೆ’ ಎಂದರು.