ನಂತರ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ತಹಶೀಲ್ದಾರ್, ‘ಶುಕ್ರವಾರದ ದೇವರ ಹಬ್ಬವನ್ನು ಪರಸ್ಪರ ಕೂಡಿ ನಡೆಸುವಂತೆ ಸೂಚಿಸಲಾಗಿದೆ. 28ರಂದು ನಗರದಲ್ಲಿ ಗ್ರಾಮದ ಮುಖಂಡರು ಹಾಗೂ ಗುರುಮಲ್ಲಪ್ಪ ಕುಟುಂಬದವರೊಡನೆ ಸಭೆ ನಡೆಸಲಾಗುವುದು. ಗಲಾಟೆ, ಬಹಿಷ್ಕಾರ ಪ್ರಕರಣಕ್ಕೆ ಆಸ್ಪದ ನೀಡಬಾರದು ಎಂದು ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಳ್ಳಲಾಗುವುದು’ ಎಂದರು. ಮುಖಂಡ ಮರಿಸ್ವಾಮಿ, ಪುಟ್ಟಬುದ್ದಿ, ಉಪ ತಹಶೀಲ್ದಾರ್ ಶ್ರೀನಿವಾಸ್ ಉಪಸ್ಥಿತರಿದ್ದರು.