ಶಿವಕುಮಾರ್ ಅವರ ಮನೆಯ ಮೇಲೂ ದಾಳಿ ನಡೆದಿದ್ದು, ಅವರನ್ನು ಎಸಿಬಿ ಬಂಧಿಸಿದೆ. ತಾಲ್ಲೂಕಿನ ಚಿಕ್ಕಪ್ಪನಹಳ್ಳಿ ಗ್ರಾಮದ ಫಲಾನುಭವಿ ಎನ್.ಜೆ. ಸಂತೋಷ್ಕುಮಾರ್ 2019–20ನೇ ಸಾಲಿನಲ್ಲಿ 2 ಎಕರೆ, 20 ಗುಂಟೆ ಜಮೀನಿನಲ್ಲಿ ರೇಷ್ಮೆ ಮನೆ ನಿರ್ಮಿಸಿಕೊಂಡಿದ್ದಾರೆ. ₹ 3 ಲಕ್ಷ ಸಹಾಯಧನ ಮಂಜೂರಾತಿಗೆ ಶಿವಕುಮಾರ್ ಶೇ 10ರಂತೆ ₹ 30 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಫಲಾನುಭವಿ ನೀಡಿಲ್ಲ.