‘ರೇಣುಕಾಚಾರ್ಯ ಹಾಲಿ ಶಾಸಕರಾಗಿದ್ದು ಸಚಿವ ಸ್ಥಾನ ನೀಡಲಾಗದ ಕಾರಣ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದ್ದನ್ನು ಒಪ್ಪಬಹುದು. ಆದರೆ, ಮಾಜಿ ಶಾಸಕ ಜೀವರಾಜ್ಗೂ ಎರಡನೇ ಬಾರಿ ಅದೇ ಹುದ್ದೆ ನೀಡಿದ್ದು ಸರಿಯಲ್ಲ. ಇವೆರಡಕ್ಕೂ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದ್ದು, ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಅನಗತ್ಯ ಖರ್ಚಿಗೆ ದಾರಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ’ ಎಂಬ ವ್ಯಾಖ್ಯಾನ ಬಿಜೆಪಿ ವಲಯದಲ್ಲಿ ವ್ಯಕ್ತವಾಗಿದೆ.