ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ ಪಲ್ಟಿ– 8 ಮಂದಿಗೆ ಗಾಯ

Last Updated 24 ಮಾರ್ಚ್ 2022, 19:09 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಬಾಬಾಬುಡನ್‌ ಗಿರಿಯಲ್ಲಿ ಗುರುವಾರ ಸಂಜೆ ಎಸ್‌ಎಂಎಸ್‌ ಬಸ್‌ ಉರುಳಿಬಿದ್ದು ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಮೈಸೂರು ಜಿಲ್ಲೆಯಪಿರಿಯಾಪಟ್ಟಣದ ಝರಿನಾ ಬಾನು (54), ಜಹಿರಾ ಬಾನು (50), ಹುಬ್ಬಳ್ಳಿಯ ಶಯಿನಾ(23) , ಬೇಗಂ ಬಿ (74), ಮೀರಜ್‌ನ ಹನೀಫ್‌ (15) , ಚಿಕ್ಕಮಗಳೂರು ತಾಲ್ಲೂಕಿನ ಅತ್ತಿಗುಂಡಿಯ ಶಾಖಿಬ್‌ (24), ವಿಜಯಪುರದ ರಶೀದಾ ಬಾನು (55) ಹಾಗೂ ದಾವಣಗೆರೆ ಜಿಲ್ಲೆ ಹರಪ್ಪನಹಳ್ಳಿಯ ಸಾಧಿಕಾ (4) ಗಾಯಗೊಂಡವರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

‘ಗಿರಿಯಲ್ಲಿ ಬಸ್‌ ನಿಂತಿತ್ತು. ಚಾಲಕ ಇಳಿದು ಹೋಗಿದ್ದರು. ಏಳು ಜನ ಬಸ್‌ನೊಳಗಿದ್ದೆವು. ವ್ಯಕ್ತಿಯೊಬ್ಬ ಚಾಲಕನ ಸೀಟಿನಲ್ಲಿ ಕುಳಿತು ಬಸ್‌ ಸ್ಟಾರ್ಟ್‌ ಮಾಡಿದರು. ಆಗ ಬಸ್‌ ಚಲಿಸಿತು, ರಸ್ತೆ ಬದಿಯ ಕಂದಕಕ್ಕೆ ಬಿದ್ದಿತು’ ಎಂದು ಗಾಯಾಳು ಶಯಿನಾ ಅವರು ‘ಪ್ರಜಾವಾಣಿ’ಗೆ
ತಿಳಿಸಿದರು.

ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT