ಇತ್ತೀಚೆಗೆ ಸಂಪುಟ ಸೇರಿದ ಉಮೇಶ ಕತ್ತಿ, ಅರವಿಂದ ಲಿಂಬಾವಳಿ, ಮುರುಗೇಶ ನಿರಾಣಿ, ಎಂ.ಟಿ.ಬಿ.ನಾಗರಾಜ್, ಎಸ್.ಶಂಕರ್, ಸಿ.ಪಿ.ಯೋಗೇಶ್ವರ್ ಮತ್ತು ಎಸ್.ಅಂಗಾರ ಅವರಿಗೆ ಖಾತೆಗಳನ್ನು ಹಂಚಬೇಕಾಗಿದೆ. ಅಲ್ಲದೆ, ಕೆಲವು ಸಚಿವರ ಖಾತೆಗಳೂ ಬದಲಾವಣೆ ಆಗುವ ಸಾಧ್ಯತೆ. ಇವರಲ್ಲಿ ಕೆಲವು ಹಿರಿಯ ಸಚಿವರು ಖಾತೆಗಳನ್ನು ಬದಲಿಸುವಂತೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆ ಆದವರಲ್ಲಿ ಕೆಲವರು ಪ್ರಬಲ ಖಾತೆಗಳಿಗಾಗಿ ಲಾಬಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.