‘ತಾಕತ್ತಿದ್ದರೆ, ಅಪ್ಪಗೆ ಹುಟ್ಟಿದ್ದರೆ ಸಿ.ಡಿ ಬಿಡುಗಡೆ ಮಾಡಲಿ. ನನಗೆ ಟಿಕೆಟ್ ಕೊಡುವವಾ ಇವಾ ಯಾರು?’ ಎಂದು ಯತ್ನಾಳ ಹೇಳಿದರು. ‘ವಿಜಯಪುರ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆ ಯಲ್ಲಿ ನಿರಾಣಿ, ವಿಜಯೇಂದ್ರ ಬಿಜೆಪಿ ಬಂಡಾಯ ಅಭ್ಯರ್ಥಿಗಳಿಗೆ ಹಣ ನೀಡಿ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಯತ್ನಿಸಿದ್ದರು’ ಎಂದು ಆರೋಪಿಸಿದರು. ‘ಬಿಜೆಪಿ ಬಂಡಾಯ, ಪಕ್ಷೇತರ ಅಭ್ಯರ್ಥಿಗಳಿಗೆ ಹಣ ನೀಡಿಲ್ಲ ಎಂದಾದರೆ ವಿಜಯೇಂದ್ರ, ನಿರಾಣಿ ಧರ್ಮಸ್ಥಳದಲ್ಲಿ ಆಣೆ ಮಾಡಲಿ’ ಎಂದು ಸವಾಲು ಹಾಕಿದರು.