ಮಾಹಿತಿ ಇಲ್ಲದೇ ಬಂದಿದ್ದ ಸುಧಾಕರ್ ತಡಬಡಾಯಿಸಿದರು. ಇದರಿಂದ ಬೇಸರಗೊಂಡ ಯಡಿಯೂರಪ್ಪ, ‘ಮಾಹಿತಿ ಇಲ್ಲದೇ ಇಲ್ಲಿಗೆ ಬರುವ ಅಗತ್ಯ ಏನಿತ್ತು? ಮೊದಲು ಚಾಮರಾಜನಗಕ್ಕೆ ಹೋಗಿ’ ಎಂದು ಸಿಡಿಮಿಡಿಗೊಂಡರು ಎಂದು ಮೂಲಗಳು ತಿಳಿಸಿವೆ.
‘ಚಾಮರಾಜನಗರದಲ್ಲಿ ಎಷ್ಟು ಪ್ರಮಾಣದ ಆಮ್ಲಜನಕ ಅಗತ್ಯವಿತ್ತು. ಎಷ್ಟು ಲಭ್ಯವಿದೆ, ಕೊರತೆ ಆಗಲು ಕಾರಣವೇನು ಎಂಬುದರ ಅಂಕಿ–ಅಂಶಗಳನ್ನು ಕೊಡಿ ಎಂದು ಯಡಿಯೂರಪ್ಪ ಕೇಳಿದರು. ದಕ್ಷತೆಯ ಜತೆಗೆ ಸರಿಯಾದ ಮತ್ತು ತಾಜಾ ಮಾಹಿತಿಯನ್ನೂ ಇಟ್ಟುಕೊಂಡಿರಬೇಕು. ಎಲ್ಲ ಜಿಲ್ಲೆಗಳ ಮೇಲೂ ನಿಗಾ ಇಟ್ಟು, ಇತಿಮಿತಿಯಲ್ಲಿ ಆಮ್ಲಜನಕ ಪೂರೈಕೆ ಮಾಡಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.