ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇವನಹಳ್ಳಿ ಬಳಿಯ ಹರಳೂರು ಗ್ರಾಮದಲ್ಲಿ ಪ್ರತಿ ಎಕರೆ 1.50 ಕೋಟಿ ಪರಿಹಾರ ನೀಡಿ 116 ಎಕರೆ ಜಮೀನನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಿಕೊಂಡಿತ್ತು. ₹ 175 ಕೋಟಿ ಪರಿಹಾರ ನೀಡಿ ಸ್ವಾಧೀನಪಡಿಸಿಕೊಂಡಿರುವ ಜಮೀನಿನ ಈಗಿನ ಮೌಲ್ಯ ₹ 400 ಕೋಟಿ. ಅದನ್ನು ₹ 50 ಕೋಟಿಗೆ ನೀಡುತ್ತಿರುವುದು ನ್ಯಾಯವೆ’ ಎಂದು ಪ್ರಶ್ನಿಸಿದರು.