‘ಮೆಸರ್ಸ್ ಒಎಂಆರ್ ಇನ್ವೆಸ್ಟ್ಮೆಂಟ್ಸ್ ಎಲ್ಎಲ್ಪಿ’ ಕಂಪನಿಯ ಅಧ್ಯಕ್ಷರು ಕೂಡಾ ಆಗಿರುವ ಜಿತೇಂದ್ರ ವೀರ್ವಾನಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ,‘ನಾವು ಈ ವ್ಯವಹಾರ
ದಲ್ಲಿ ಭಾಗಿಯಾಗಿಲ್ಲ ಎಂದು ಹೇಳುವ ಅರ್ಜಿದಾರರಿಗೆ ತಮ್ಮ ಮೇಲೆ ಅಷ್ಟೊಂದು ವಿಶ್ವಾಸವಿದ್ದರೆ, ವಿಚಾರಣೆ ಎದುರಿಸಿ ಶುದ್ಧವಾಗಿ ಹೊರಬರುವ ಅಗತ್ಯವಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.