‘ನಾನು ಕೂಡ ಪುರಸಭೆ ಸದಸ್ಯನಾಗಿ ಶಿಕಾರಿಪುರದಲ್ಲಿ ರಾಜಕೀಯ ಜೀವನ ಆರಂಭಿಸಿದೆ. ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸು ಕೂಡ ಕಂಡಿರಲಿಲ್ಲ. ಇಡೀ ರಾಜ್ಯದಲ್ಲಿ ಹುಚ್ಚನಂತೆ ಗ್ರಾಮ ಗ್ರಾಮಗಳಿಗೂ ಅಲೆದಿದ್ದೇನೆ, ಹಲವಾರು ಹೋರಾಟ ನಡೆಸಿದ್ದೇನೆ. ರೈತರ ಪಕ್ಷವನ್ನಾಗಿ ಮಾಡಲು ಹೋರಾಡಿದ್ದೇನೆ’ ಎಂದು ನುಡಿದರು.