ನಂತರ ತರಗತಿಗಳು ನಡೆಯುತ್ತಿದ್ದ ಸಿಟಿಜನ್ ಕ್ಲಬ್ ಆವರಣಕ್ಕೆ ಬಂದು ಕುಡುಗೋಲು ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಮುಂದಾದರು. ವಕೀಲರು, ಜಿಲ್ಲೆಯ ನ್ಯಾಯಾಧೀಶರು ಸಹ ಸ್ವಚ್ಛತೆಯಲ್ಲಿ ತೊಡಗಿದರು. ಅಷ್ಟರಲ್ಲಿ ಎಚ್ಚೆತ್ತ ನಗರಸಭೆ ಅಧಿಕಾರಿಗಳು, ಪೌರಕಾರ್ಮಿಕರು, ಯಂತ್ರವನ್ನು ತಂದು ಇಡೀ ಆವರಣ ಸ್ವಚ್ಛಗೊಳಿಸಿದರು. ಕಾಲೇಜು ಆವರಣ ಪೂರ್ಣವಾಗಿ ಸ್ವಚ್ಛವಾಗುವವರೆಗೂ ನ್ಯಾಯಮೂರ್ತಿಗಳು ಅಲ್ಲಿಂದ ಕದಲಲಿಲ್ಲ.