ಬೆಂಗಳೂರು: ದೇಶದ ಭವಿಷ್ಯವಾದ ಮಕ್ಕಳ ಬದುಕಿಗೆ ಬಿಜೆಪಿ ಕಲ್ಲು ಹಾಕುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಾಜ್ಯದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಿರುವ ವರದಿ ಆತಂಕಕಾರಿ. ಒಂದೆಡೆ ಬಡತನವನ್ನು ಹೆಚ್ಚಿಸಿ, ಮತ್ತೊಂದೆಡೆ ಶೈಕ್ಷಣಿಕ ಕ್ಷೇತ್ರವನ್ನು ಕಡೆಗಣಿಸಿರುವ ಬಿಜೆಪಿ ಸರ್ಕಾರವೇ ಇದಕ್ಕೆ ನೇರ ಹೊಣೆ’ ಎಂದು ಕಿಡಿಕಾರಿದೆ.
‘ಶಿಕ್ಷಣದಿಂದ ವಿಮುಖರಾದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಯಾವುದೇ ಯೋಜನೆ ರೂಪಿಸದ ಬಿಜೆಪಿ ಸರ್ಕಾರ ಮಕ್ಕಳ ಭವಿಷ್ಯವನ್ನು ಕತ್ತಲೆಗೆ ತಳ್ಳುತ್ತಿದೆ’ ಕಾಂಗ್ರೆಸ್ ಟೀಕಿಸಿದೆ.