‘ಫೆ. 4ರಂದು ಸ್ವಾತಂತ್ರ್ಯ ಯೋಧರ ಚಿತ್ರ ಪ್ರದರ್ಶನದ ಉದ್ಘಾಟನೆ, ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಶಿ ಅವರಿಗೆ ಸನ್ಮಾನ, ಆರ್.ಎಸ್. ಮರಾಠೆ ಅವರ ಜೀವನಗಾಥೆ ‘ರಂಗೊಮಾಮ್ಮಾ’ ಪುಸ್ತಕ, ಬೆಂಗಳೂರು ಚಿತ್ಪಾವನ ಸುವರ್ಣ ಭಾವಚಿತ್ರ ಸಂಪುಟ ಮತ್ತು ಚಿತ್ಪಾವನ ಸಮಾಜ ಸುವರ್ಣ ಸ್ಮೃತಿಯನ್ನು ಬಿಡುಗಡೆಗೊಳಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಗುವುದು’ ಎಂದು ಚಿತ್ಪಾವನ ಸಮಾಜದ ಅಧ್ಯಕ್ಷ ಎಂ. ಗಣಪತಿ ಜೋಶಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.