ಜಿಲ್ಲಾ ಕಾರಾಗೃಹದಲ್ಲಿ ಶಿವಮೂರ್ತಿ ಶರಣರು ಇರುವ ಕಾರಣಕ್ಕೆ ತಮ್ಮ ಕಕ್ಷಿದಾರರಿಗೆ ದಾವಣಗೆರೆ ಜಿಲ್ಲಾ ಕಾರಾಗೃಹ ನೀಡುವಂತೆ ಬಸವರಾಜನ್ ಪರ ವಕೀಲರು ಕೋರಿಕೊಂಡರು. ಈ ಕೋರಿಕೆಯನ್ನು ನ್ಯಾಯಾಲಯ ತಿರಸ್ಕರಿಸಿತು. ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಶಿವಮೂರ್ತಿ ಶರಣರು, ಮಠದ ವ್ಯವಸ್ಥಾಪಕರಾಗಿದ್ದ ಪರಮಶಿವಯ್ಯ ಹಾಗೂ ಮಠದ ಮಾಜಿ ಆಡಳಿತಾಧಿಕಾರಿ ಬಸವರಾಜನ್ ಈಗ ಒಂದೇ ಜೈಲು ಸೇರಿದ್ದಾರೆ.