‘ವಿದ್ಯಾನಿಧಿ ಯೋಜನೆಯಡಿ ₹2 ಸಾವಿರದಿಂದ ₹11ಸಾವಿರದವರೆಗೆ ವಿದ್ಯಾರ್ಥಿವೇತನ ಸಿಗಲಿದೆ. ನೇಕಾರರ ಸಮುದಾಯದ 12 ಸಾವಿರ ಮಕ್ಕಳು, ಟ್ಯಾಕ್ಸಿ ಚಾಲನೆ ಮಾಡುವ 50 ಸಾವಿರ ಚಾಲಕರ ಮಕ್ಕಳಿಗೆ ಹಾಗೂ ಮೀನುಗಾರರ ಮಕ್ಕಳಿಗೂ ಯೋಜನೆಯನ್ನು ವಿಸ್ತರಿಸಲಾಗಿದೆ. ಇದಕ್ಕಾಗಿ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಈ ಎಲ್ಲ ಯೋಜನೆಗಳಿಗೆ ಇಂದೇ ಚಾಲನೆ ನೀಡಿದ್ದೇವೆ’ ಎಂದು ಬೊಮ್ಮಾಯಿ ತಿಳಿಸಿದರು.