‘ಇಂದಿನ ಎಲ್ಲ ಸಮಸ್ಯೆಗಳಿಗೂಬಸವಣ್ಣ ತನ್ನ ವಚನಗಳಲ್ಲಿ ಪರಿಹಾರ ನೀಡಿದ್ದಾರೆ. ಆದರೆ, ಆ ವಚನಗಳನ್ನು ಪಾಲಿಸುವಲ್ಲಿ ನಾವೆಲ್ಲ ಎಷ್ಟರಮಟ್ಟಿಗೆ ಹಿಂದುಳಿದಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣನವರು ನಮ್ಮಂತೆ ಮನುಷ್ಯರಾಗಿಯೇ ಹುಟ್ಟಿದ್ದು, ಅವರನ್ನು ದೇವರನ್ನಾಗಿ ಮಾಡಬೇಡಿ.ಒಬ್ಬ ಸಾಮಾನ್ಯ ಸನ್ಮಾರ್ಗದಲ್ಲಿ ನಡೆದರೆ ದೇವಮಾನವ ಆಗಬಲ್ಲ ಎಂದು ತೋರಿಸಿರುವಬಸವಣ್ಣನವರು ಈಗಾಗಲೇ ದೇವರ ಸ್ಥಾನದಲ್ಲಿದ್ದಾರೆ’ ಎಂದರು.