‘ಇವತ್ತಿನ ಸಭೆ ನಡೆದಿದ್ದು ದೇವೇಗೌಡರ ಪತ್ರದ ವಿಚಾರವಾಗಿ ಮಾತ್ರ. ಈ ಹಿಂದೆ ಯಾರೆಲ್ಲ ಪತ್ರ ಬರೆದಿದ್ದರೋ ಅವರಿಗೆಲ್ಲ ಜೂ.8 ರಂದೇ ಉತ್ತರ ನೀಡಲಾಗಿದೆ. ಮತ್ತೊಮ್ಮೆ ಉತ್ತರ ನೀಡುವ ಅಗತ್ಯವಿಲ್ಲ. ಕೆಲವು ತಪ್ಪುಗಳನ್ನು ಸರಿಪಡಿಸುವುದಾಗಿ ಹೇಳಿದ್ದೆವು. ಅದನ್ನು ಮಾಡಿದ್ದೇವೆ. ‘ಸಂವಿಧಾನ ಶಿಲ್ಪಿ’ ಪದ ಬಿಟ್ಟು ಹೋಗಿದ್ದನ್ನು ಸೇರಿಸಿದ್ದೇವೆ. ಅಂಬೇಡ್ಕರ್ ಚಿಂತನೆಯ ವಿಚಾರಗಳನ್ನು ಸೇರಿಸಿದ್ದೇವೆ. ಬದಲಾವಣೆಗೆ ಮುಕ್ತ ಮನಸ್ಸು ಹೊಂದಿರುವುದಾಗಿ ಮುಖ್ಯಮಂತ್ರಿ ಹೇಳಿದ್ದು, ಅದಕ್ಕೆ ತಕ್ಕಂತೆ ನಡೆದುಕೊಂಡಿದ್ದೇವೆ’ ಎಂದೂ ಹೇಳಿದರು.