‘ಶ್ರವಣದೋಷ ಸಮಸ್ಯೆಗೆ ಸಂಬಂಧಿಸಿದಂತೆ ಕಳೆದ ಸಾಲಿನಲ್ಲಿ 26,959 ಮಕ್ಕಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು,2,959 ಮಕ್ಕಳಲ್ಲಿ ತೀವ್ರತರವಾದ ಕಿವುಡುತನ ಕಂಡುಬಂದಿದೆ. 2022-23ನೇ ಸಾಲಿನಲ್ಲಿ ತೀವ್ರ ಶ್ರವಣದೋಷ ಸಮಸ್ಯೆ ಇರುವ 500 ಮಕ್ಕಳಿಗೆಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಿ, ಅವರ ವಾಕ್–ಶ್ರವಣ ಶಕ್ತಿಯನ್ನು ಉತ್ತಮಪಡಿಸಲಾಗುತ್ತದೆ. ಇದಕ್ಕೆ ₹ 32 ಕೋಟಿ ಅನುದಾನ ಮೀಸಲಿಡಲಾಗಿದೆ.ಹೆಚ್ಚಿನ ಮಕ್ಕಳಿಗೆ ಕಿವುಡುತನವು ಹುಟ್ಟಿನಿಂದಲೇ ಬಂದಿರುತ್ತಿದೆ’ ಎಂದು ಇಲಾಖೆ ತಿಳಿಸಿದೆ.