‘ಹಿಂದೆ ಶೇಕಡ 50ರಷ್ಟು ನೆರವು ನೀಡುವಾಗ ಯಾವುದೇ ನಿರ್ಬಂಧವಿರಲಿಲ್ಲ. ನೆರವಿನ ಮೊತ್ತವನ್ನು ಶೇ 75ಕ್ಕೆ ಹೆಚ್ಚಿಸುವಾಗ ಗರಿಷ್ಠ ₹ 2 ಕೋಟಿ ಅಥವಾ ಎರಡು ಎಕರೆ ಜಮೀನಿನ ಮಿತಿ, ಅನುದಾನದ ಲಭ್ಯತೆ ಮತ್ತಿತರ ಷರತ್ತುಗಳನ್ನು ಹಾಕಲಾಗಿತ್ತು. ಈ ಷರತ್ತುಗಳನ್ನು ಕೈಬಿಡುವಂತೆ ಮನವಿ ಮಾಡಲಾಗಿತ್ತು. ಶೇ 50ರ ನೆರವು ನೀಡುವಾಗ ಇದ್ದ ಷರತ್ತುಗಳನ್ನೇ ಮುಂದುವರಿಸಿ ಸೋಮವಾರ ಆದೇಶ ಹೊರಡಿಸಲಾಗಿದೆ’ ಎಂದು ಸಂಘದ ಕಾರ್ಯಾಧ್ಯಕ್ಷ ಸಿ.ಜಿ. ಶ್ರೀನಿವಾಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.