ಪ್ರಕಾಶ ಹುಕ್ಕೇರಿ ಅವರು ಮಧ್ಯಾಹ್ನ 2ರವರೆಗೂ ಮತ ಎಣಿಕೆ ಕೇಂದ್ರಕ್ಕೆ ಬಂದಿರಲಿಲ್ಲ. ಆದರೆ, ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ಬೆಳಿಗ್ಗೆ 8ರಿಂದಲೇ ಎಣಿಕೆ ಟೇಬಲ್ ಮುಂದೆ ಠಿಕಾಣಿ ಹೂಡಿದ್ದರು. ಮೊದಲ ಸುತ್ತಿನಲ್ಲಿ ಪ್ರಕಾಶ ಹುಕ್ಕೇರಿ ಮುನ್ನಡೆ ಸಾಧಿಸಿದ್ದನ್ನು ಗಮನಿಸಿದ ಅರುಣ ಅವರು, ಎಣಿಕೆ ಕೆಂದ್ರದಿಂದ ಹೊರನಡೆದದರು.