ಸಿರುಗುಪ್ಪದಲ್ಲಿ ಗುರುವಾರ ಸಂಜೆ ನಡೆದ ’ಜನ ಸಂಕಲ್ಪ ಯಾತ್ರೆ‘ಯಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ, ’ದಿಲ್ಲಿಯಿಂದ 100 ರೂಪಾಯಿ ಬಿಡುಗಡೆ ಮಾಡಿದರೆ ಹಳ್ಳಿಗೆ 15 ರೂಪಾಯಿ ಮಾತ್ರ ಬರುತಿತ್ತು. ಉಳಿದ 85 ರೂಪಾಯಿ ಸೋರಿಕೆ ಆಗುತಿತ್ತು. ಈ ಮಾತನ್ನು ನಾನು ಹೇಳುತ್ತಿಲ್ಲ. ದಿ. ರಾಜೀವ್ ಗಾಂಧಿ ಅವರೇ ಹೇಳಿದ್ದರು‘ ಎಂದರು.