ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು ‘ನಾನು ಗೃಹ ಸಚಿವನಾಗಿದ್ದಾಗ ವರದಿ ತರಿಸಿಕೊಂಡೆ. ಆಗ ನಾಲ್ಕೈದು ಜನರು ರಾಜಕೀಯ ಕಾರಣಕ್ಕೆ ಹತ್ಯೆಯಾದರೆ ಉಳಿದ ಹತ್ಯೆಗಳು ಹಳೇ ದ್ವೇಷ, ಆಸ್ತಿ ಜಗಳ, ಅಪಘಾತದಿಂದ ಸತ್ತಿದ್ದಾರೆ. ಆ ಬಗ್ಗೆ ‘ನಗ್ನ ಸತ್ಯ’ ಎಂಬ ಪುಸ್ತಕ ಬಿಡುಗಡೆ ಮಾಡಿದ್ದೆ. ಅದರಲ್ಲಿ ಸತ್ತವರು ಆರ್ಎಸ್ಎಸ್, ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ಕಾರ್ಯಕರ್ತರಷ್ಟೇ ಅಲ್ಲ, ಎಸ್ಡಿಪಿಐ, ಪಿಫ್ಎಐ ಸದಸ್ಯರೂ ಇದ್ದರು. ಅದಕ್ಕೆ ಕಾರಣ ಯಾರು?ಮೊದಲುಕೊಲೆ ಮಾಡಿದವರ ವಿರುದ್ಧ ದೋಷಾರೋಪ ಸಲ್ಲಿಸಲಾಗುತ್ತಿತ್ತು. ಪಿತೂರಿ ಮಾಡಿದವರ ಹೆಸರು ಸೇರುತ್ತಿರಲಿಲ್ಲ. ನಂತರ 2017-18ರಲ್ಲಿ ಪ್ರಕರಣದಲ್ಲಿ ಸೇರಿಸಲು ಆರಂಭಿಸಿದ ನಂತರ ಕೊಲೆಗಳ ಸರಣಿ ನಿಂತಿತು’ ಎಂದು ವಿವರ ನೀಡಿದರು.