ಬಳ್ಳಾರಿ ಮೇಯರ್ ಉಪ ಮೇಯರ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಬಂದಿದ್ದ ಖಾದರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಪಠ್ಯದಲ್ಲಿ ಭಗವದ್ಗೀತೆ ಅಷ್ಟೇ ಅಲ್ಲ, ವಚನ ಸಾಹಿತ್ಯ, ನಾರಾಯಣಗುರು ಅವರ ಚಿಂತನೆ, ಕೋಟಿ ಚನ್ನಯ್ಯನವರ ವಿಚಾರ ಸೇರಿದಂತೆ ಎಲ್ಲ ಧರ್ಮಗಳ ಉತ್ತಮ ಅಂಶಗಳನ್ನು ಸೇರಿಸಿ ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸಲಿ’ ಎಂದರು.