‘ಭಾರತದಲ್ಲಿ ಧರ್ಮ ಸಹಿಷ್ಣುತೆ ಎಷ್ಟಿದೆ ಎಂಬುದನ್ನು ನೋಡಬೇಕೆಂದರೆ ನೀವು ಬುದ್ಧನನ್ನು
ನೋಡಿ’ ಎಂದು ಸ್ವಾಮಿ ವಿವೇಕಾನಂದರು ಶಿಕಾಗೋ ಸರ್ವ ಧರ್ಮ ಸಮ್ಮೇಳನದಲ್ಲಿ ಹೇಳಿದ್ದರು. ಬುದ್ಧ
ತಾನು ವಿಷ ಕುಡಿದು ಜೀವತೆತ್ತರೂ ಇನ್ನೊಬ್ಬರನ್ನು ಬದುಕಿಸಿದ. ಅಂಥ ತ್ಯಾಗ, ಸಹಿಷ್ಣುತೆ ನಮ್ಮಲ್ಲಿದೆ ಎಂದು ವಿವೇಕಾನಂದರು ಬಿಂಬಿಸಿದರು. ಆದರೆ, ಶಿಕಾಗೊ ಭಾಷಣದ ಬಗ್ಗೆ ಮಾತನಾಡುವವರೆಲ್ಲ ಈ ಅಂಶವನ್ನು ಮರೆಮಾಚುತ್ತಲೇ ಬಂದಿದ್ದಾರೆ. ಒಂದೆಡೆ ದೇವಸ್ಥಾನದ ಒಳಗೆ ಹೋಗಲು ಬಿಡುವುದಿಲ್ಲ. ಇನ್ನೊಂದೆಡೆ ನಮ್ಮ ಧರ್ಮ– ನಮ್ಮ ಧರ್ಮ ಎಂದು ಬಡಿದುಕೊಳ್ಳುತ್ತಾರೆ. ಧರ್ಮ ಎಂಬುದು ಇವರೊಬ್ಬರ ಹಿತಕ್ಕಾಗಿ ಮಾಡಿದ್ದಲ್ಲ, ಅದು ಎಲ್ಲರ ಉದ್ಧಾರಕ್ಕಾಗಿ ಇದೆ. ಬೇರೊಬ್ಬರ ಧರ್ಮವನ್ನು ಟೀಕಿಸುವ ಬದಲು ನಮ್ಮ ಧರ್ಮದ ತತ್ವಗಳನ್ನು ನಾವು ಸರಿಯಾಗಿ ಪಾಲಿಸಿದರೆ ಸಾಕು’ ಎಂದು ಸಲಹೆ ನೀಡಿದರು.