ಮೈಸೂರು: ‘ಕಾಂಗ್ರೆಸ್ನವರದ್ದು ಭಾರತ ಒಡೆಯುವ ಯಾತ್ರೆಯೇ ಹೊರತು ಜೋಡಿಸುವ ಉದ್ದೇಶದ್ದಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಟೀಕಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಮೊದಲು ಕಾಂಗ್ರೆಸ್ ಜೋಡಣೆ ಮಾಡಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.
‘ಒಂದಾಗಿದ್ದ ಭಾರತವನ್ನು ಒಡೆದವರೇ ಕಾಂಗ್ರೆಸ್ನವರು. ಈ ಯಾತ್ರೆಯಿಂದ ಆ ಪಕ್ಷದಲ್ಲೇ ಮತ್ತಷ್ಟು ಕಂದಕ ಸೃಷ್ಟಿಯಾಗುತ್ತದೆ. ಇದರಿಂದ ಅವರಿಗೆ ಯಾವುದೇ ರಾಜಕೀಯ ಲಾಭ ಆಗುವುದಿಲ್ಲ. ಜನರಿಗೆ ಎಲ್ಲವೂ ಗೊತ್ತಿದೆ’ ಎಂದರು.