ಕೋವಿಡ್ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಜನರ ನೆರವಿಗೆ ನಿಂತಿದೆ. ಸಹಾಯವಾಣಿ, ಆಂಬುಲೆನ್ಸ್, ಔಷಧಿ ಕಿಟ್, ಆಹಾರದ ಕಿಟ್ ವಿತರಣೆ, ಉಚಿತವಾಗಿ ಲಸಿಕೆ ಅಭಿಯಾನ ಸೇರಿದಂತೆ ₹ 100 ಕೋಟಿಯವರೆಗೂ ಯೋಜನೆ ಹಮ್ಮಿಕೊಂಡಿದೆ. ಯುವ ಕಾಂಗ್ರೆಸ್ ಸದಸ್ಯರು ರಾಜ್ಯದ ಉದ್ದಗಲಕ್ಕೂ ಜನರ ಸೇವೆಗೆ ನಿಂತಿದ್ದಾರೆ ಎಂದು ಶಿವಕುಮಾರ್ ಹೇಳಿದರು.