ಪಾದಯಾತ್ರೆ ಯಶಸ್ಸಿಗಾಗಿ ಪ್ರಾರ್ಥಿಸಿ, ಕಾವೇರಿ ಉಗಮ ಸ್ಥಳವಾದ ತಲಕಾವೇರಿಯಲ್ಲಿ ಶುಕ್ರವಾರ ಮಹಾಸಂಕಲ್ಪ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಪಕ್ಷಾತೀತ ಹೋರಾಟ. ಸಂಘ–ಸಂಸ್ಥೆಗಳ ಮುಖಂಡರೂ ಪಾಲ್ಗೊಳ್ಳಬಹುದು. ಪ್ರತಿದಿನ 15 ಕಿ.ಮೀ ಸಾಗುವ ಪಾದಯಾತ್ರೆಯು ದಾಖಲೆ ನಿರ್ಮಿಸಲಿದೆ. ಮೇಕೆದಾಟು ನಮ್ಮ ಹಕ್ಕು. ಅದನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ’ ಎಂದು ಪ್ರತಿಪಾದಿಸಿದರು.