ಕೆಪಿಸಿಸಿ ಉಪಾಧ್ಯಕ್ಷ ಎಚ್.ಎಂ. ರೇವಣ್ಣ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಈ ವಿಚಾರದಲ್ಲಿ ಮೌನಿ ಬಾಬಾ ಆಗಿರುವುದೇಕೆ? ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮ ಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ನಾಗರಾಜ್ ಹಾಗೂ ಸೌಮ್ಯಾ ಎಂಬುವವರ ಬಂಧನವಾಗಿದ್ದು, ಆ ಪ್ರಕರಣದಲ್ಲೂ ಅವರು ಮೌನವಾಗಿ
ರುವುದು ಸಂಶಯ ಹುಟ್ಟು ಹಾಕಿದೆ’ ಎಂದರು. ‘ದರ್ಶನ್ ಗೌಡನಿಗೆ ನೋಟಿಸ್ ನೀಡಿದ್ದರೂ ಬಂಧಿಸಿಲ್ಲ ಯಾಕೆ? ಹಣ ನೀಡಿರುವ ವಿಷಯ ಬಹಿರಂಗ ಆಗಬಹುದೆಂದು ಆತನನ್ನು ಬಂಧಿಸದೇ, ವಿಚಾರಣೆ ನಡೆಸದಂತೆ ಸಂಚು ರೂಪಿಸಲಾಗಿದೆ’ ಎಂದರು.