ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶಾಲೆ, ಕಾಲೇಜುಗಳು ಶುರುವಾಗಿ ಅರ್ಧ ವರ್ಷ ಕಳೆದಿದೆ. ಇನ್ನೂ ಸಹ ಪಠ್ಯ ಪುಸ್ತಕ ಪೂರೈಸಲು ಸಾಧ್ಯವಾಗಲಿಲ್ಲ ಈ ಭ್ರಷ್ಟ ಸರ್ಕಾರಕ್ಕೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳಿ ಎಂಬ ಬಿಟ್ಟಿ ಸಲಹೆ ಅತಿ ನಾಚಿಕೆಗೇಡಿನ ಸಂಗತಿ. ಬಿಜೆಪಿ ಆಡಳಿತದಲ್ಲಿ ಮಕ್ಕಳ ಭವಿಷ್ಯದ ಭರವಸೆ ಇಲ್ಲದಾಗಿದೆ’ ಎಂದು ಉಲ್ಲೇಖಿಸಿದೆ.