ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಪಗಳನ್ನು ಹುಡುಕುವುದೇ ಬಿಜೆಪಿ ಸರ್ಕಾರದ ಕೆಲಸ: ಕಾಂಗ್ರೆಸ್ ಕಿಡಿ

Last Updated 13 ಡಿಸೆಂಬರ್ 2021, 10:40 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿಯೊಂದಕ್ಕೂ ನೆಪ ಹೇಳುವುದೇ ಬಿಜೆಪಿ ಸರ್ಕಾರದ ಕೆಲಸವಾಗಿಬಿಟ್ಟಿದೆ. ಈ ಸರ್ಕಾರದಿಂದ ಮಕ್ಕಳ ಭವಿಷ್ಯಕ್ಕೂ ಭರವಸೆ ಇಲ್ಲದಾಗಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.

ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಶಾಲೆ, ಕಾಲೇಜುಗಳು ಶುರುವಾಗಿ ಅರ್ಧ ವರ್ಷ ಕಳೆದಿದೆ. ಇನ್ನೂ ಸಹ ಪಠ್ಯ ಪುಸ್ತಕ ಪೂರೈಸಲು ಸಾಧ್ಯವಾಗಲಿಲ್ಲ ಈ ಭ್ರಷ್ಟ ಸರ್ಕಾರಕ್ಕೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ಜೆರಾಕ್ಸ್ ಮಾಡಿಸಿಕೊಳ್ಳಿ ಎಂಬ ಬಿಟ್ಟಿ ಸಲಹೆ ಅತಿ ನಾಚಿಕೆಗೇಡಿನ ಸಂಗತಿ. ಬಿಜೆಪಿ ಆಡಳಿತದಲ್ಲಿ ಮಕ್ಕಳ ಭವಿಷ್ಯದ ಭರವಸೆ ಇಲ್ಲದಾಗಿದೆ’ ಎಂದು ಉಲ್ಲೇಖಿಸಿದೆ.

‘ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ₹1 ಲಕ್ಷ ಪರಿಹಾರ ಘೋಷಣೆ ಮಾಡಿ 6 ತಿಂಗಳು ಸಂದಿವೆ. ಪತ್ರಿಕೆಗಳಲ್ಲಿ, ಬಸ್‌ಗಳಲ್ಲಿ ಜಾಹಿರಾತುಗಳೂ ರಾರಾಜಿಸಿವೆ! ಆದರೆ ವಾಸ್ತವ ಬೇರೆ. ಇತರ ಯೋಜನೆಯ ಅನುಷ್ಠಾನ ಮಾಡಲು ಕೊರೊನಾ ನೆಪ ಹೇಳುತ್ತಿದ್ದ ಸರ್ಕಾರ ಈಗ ಪರಿಹಾರ ಕೊಡಲು ನೀತಿ ಸಂಹಿತೆಯ ನೆಪ ಹೇಳುತ್ತಿದೆ. ನೆಪಗಳನ್ನ ಹುಡುಕುವುದೇ ಈ ಸರ್ಕಾರದ ಕೆಲಸ!’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT