‘ಮಾನ್ಯತೆ ನೀಡುವ ಪ್ರಕ್ರಿಯೆ ಮುಗಿಸದೆ, ಅರ್ಜಿ ಸಲ್ಲಿಸಿದ ಶಾಲೆಗಳನ್ನು ಕಾನೂನುಬಾಹಿರ ಶಾಲೆಗಳೆಂದು ಘೋಷಿಸುವುದು ಇಲಾಖೆಯ ಮೂರ್ಖತನದ ಪರಮಾವಧಿ. ಇಲಾಖೆ ದಿನಕ್ಕೊಂದು ಆದೇಶ ಹೊರಡಿಸುತ್ತಿದ್ದು, ಇದು ದ್ವಂದ್ವ ಹಾಗೂ ಬೇಜವಾಬ್ದಾರಿ ನಿಲುವು’ ಎಂದು ಸಂಘದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅಭಿಪ್ರಾಯಪಟ್ಟಿದ್ದರು.