1858ರಲ್ಲಿ ದಕ್ಷಿಣ ಭಾರತದ ಅರಸರನ್ನೆಲ್ಲಾ ಒಂದುಗೂಡಿಸಿ, ಆಂಗ್ಲರ ವಿರುದ್ಧ ಹೋರಾಡಿದ ಹೆಮ್ಮೆ ಈ ಮನೆತನಕ್ಕಿದೆ. ಈ ಸಂಸ್ಥಾನದ ನಾಯಕರ ಸಾಂಸ್ಕೃತಿಕ ವಿಷಯವನ್ನು ಪ್ರೊ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಪಠ್ಯಪುಸ್ತಕ ರಚನಾ ಸಮಿತಿಯು ಪಠ್ಯಪುಸ್ತಕದಲ್ಲಿ ಸೇರಿಸಿ, ನ್ಯಾಯ ದೊರಕಿಸಿಕೊಟ್ಟಿತ್ತು. ಆದರೆ, ಏಕಾಏಕಿ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಇತಿಹಾಸ ಕಡಿತಗೊಳಿಸಿರುವುದು ಸರಿಯಲ್ಲ. ಈ ಲೋಪ ಸರಿಪಡಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು’ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.