ಸಾಗರ: ‘ಮುಸ್ಲಿಂ ಸಮುದಾಯದವರಿಗೆ ಪ್ರೀತಿ, ಪ್ರೇಮದ ವಿಷಯ ಗೊತ್ತಿಲ್ಲ. ಮುಸ್ಲಿಮರು ಎಂದರೆ ಕಾಮುಕರೆ. ಅವರು ಬೇರೆ ಧರ್ಮದವರನ್ನು ಮದುವೆಯಾಗುವುದೇ ಇಸ್ಲಾಂಗೆ ಮತಾಂತರ ಮಾಡುವುದಕ್ಕಾಗಿ' ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಇಲ್ಲಿನ ಗಾಂಧಿ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಶಿವಾಜಿ ಜಯಂತಿ ಆಚರಣೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಹಿಂದೂ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿರುವ ಯಾವುದೇ ಮಸೀದಿ ಅಥವಾ ಚರ್ಚ್ ಆಯಾ ಧರ್ಮದವರಿಗೆ ಸೇರಿದ್ದಲ್ಲ. ಅದೆಲ್ಲವೂ ಈ ನೆಲದ ಸ್ವತ್ತು ಆಗಿದೆ. ಕೆಲವು ರಾಜಕೀಯ ಪಕ್ಷಗಳಿಗೆ ಈ ಸತ್ಯವನ್ನು ಹೇಳುವ ಧೈರ್ಯವಿಲ್ಲ. ಮುಸ್ಲಿಮರು ಬಿಜೆಪಿಗೆ ಮತ ನೀಡದೇ ಇದ್ದರೂ ಆ ಪಕ್ಷಕ್ಕೆ ಅಲ್ಪಸಂಖ್ಯಾತ ಘಟಕ ಎಂದು ಇರುವುದಾದರೂ ಏಕೆ ಎಂದರು.
ಭಾರತದ ಧ್ವಜ ಕೇಸರಿ ಬಣ್ಣದ್ದೇ ಆಗಿರಬೇಕು ಎಂಬ ಪ್ರಸ್ತಾಪ ಇಂದಿನದ್ದಲ್ಲ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲೆ ಆ ಪ್ರಸ್ತಾಪವಿತ್ತು. ಈ ದೇಶವೇ ಕೇಸರಿ ಆಗಿರುವಾಗ ಕೇಸರೀಕರಣ ಮಾಡುವ ಪ್ರಶ್ನೆ ಎಲ್ಲಿಂದ ಉದ್ಭವವಾಗುತ್ತದೆ ಎಂದು ಕೇಳಿದರು.