‘ಒಕ್ಕಲಿಗ ಸಮುದಾಯದವರು ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 16 ರಷ್ಟಿದ್ದಾರೆ. ಒಕ್ಕಲಿಗರೊಡನೆ ಕೊಡವ, ರೆಡ್ಡಿ, ಕಾಪು ಇನ್ನಿತರೆ ಉಪಜಾತಿಗಳನ್ನು ಸೇರಿಸಲಾಗಿದೆ. ಶೇ 21ಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ‘ಪ್ರವರ್ಗ-3ಎ’ಗೆ, ಕೇವಲ ಶೇ 4 ರಷ್ಟು ಮೀಸಲಾತಿ ನೀಡಲಾಗಿತ್ತು. ಒಕ್ಕಲಿಗ ಸಮುದಾಯಕ್ಕೆ ಶೇ 3ಕ್ಕೂ ಕಡಿಮೆ ಮೀಸಲಾತಿ ಸಿಗುತ್ತಿತ್ತು. ಹೀಗಾಗಿ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಒಕ್ಕಲಿಗ ಹಾಗೂ ಇನ್ನಿತರೆ ಹಿಂದುಳಿದ ಜಾತಿಯನ್ನು ಒಳಗೊಂಡ ‘ಪ್ರವರ್ಗ-3ಎ’ ಅಡಿ ಶೇ 12ರಷ್ಟು ಮೀಸಲಾತಿ ನೀಡಲು ರಾಜ್ಯ ಸರ್ಕಾರಕ್ಕೆ ಕೋರಲಾಗಿತ್ತು. ಮುಂದಿನ ದಿನಗಳಲ್ಲಿ ಈ ಬಗ್ಗೆ ಮನವರಿಕೆ ಮಾಡಿಸುತ್ತೇವೆ’ ಎಂದು ತಿಳಿಸಿದರು.