‘ತ್ಯಾಜ್ಯದಲ್ಲಿ ಕಾಸು ಎಣಿಸುವ, ಒಂದು ಅಡಿ ಆಳದ ಗುಂಡಿ ತೆಗೆದು, ಮೂರು ಅಡಿಗೆ ಬಿಲ್ ತೋರಿಸುವ ವಿಚಾರ ಬಹಿರಂಗ ಗುಟ್ಟಿನಂತೆ. ಇಂತಹ ವಹಿವಾಟಿಗೆ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಒಗ್ಗಟ್ಟು ಪ್ರದರ್ಶಿಸುತ್ತಾರೆ. ಪಾಲಿಕೆ ಮುಖ್ಯಸ್ಥರಿಗೆ ಅರಿವಿದ್ದೋ, ಇಲ್ಲದೆಯೋ ಇಂತಹ ವ್ಯವಹಾರಗಳು ಎಗ್ಗಿಲ್ಲದೆ ನಡೆಯುತ್ತವೆ. ಸ್ಮಾರ್ಟ್ ಸಿಟಿ ಯೋಜನೆಯಂತೂ ಭ್ರಷ್ಟಾಚಾರದ ಕೇಂದ್ರವಾಗಿದೆ. ಜನರ ತೆರಿಗೆ ಹಣದಲ್ಲಿ ದುಂದುವೆಚ್ಚ ಆಗುತ್ತಿದೆ’ ಎಂದು ನೇರ ಆರೋಪ ಮಾಡಿದರು.