ಸಭಾಪತಿ ಹಾಜರಿದ್ದರೂ ಉಪ ಸಭಾಪತಿ ಪೀಠ ಏರಿ ಕುಳಿತದ್ದು, ಕಾಂಗ್ರೆಸ್ ಸದಸ್ಯರು ಉಪ ಸಭಾಪತಿಯವರನ್ನು ಪೀಠದಿಂದ ಕೆಳಗೆ ಎಳೆದು ಹಾಕಿದ್ದು, ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಪರಸ್ಪರ ತಳ್ಳಾಟ, ನೂಕಾಟ, ಘರ್ಷಣೆಯಲ್ಲಿ ನಿರತರಾದ ಘಟನೆ ಕುರಿತು ಸದನ ಸಮಿತಿಯಿಂದ ವಿಚಾರಣೆ ನಡೆಸಲು ಸಭಾಪತಿ ನಿರ್ಧರಿಸಿದ್ದಾರೆ.